ಗೃಹ ನಿರ್ಮಾಣ ಸಹಕಾರ ಸಂಘಗಳು ಮೋಸ ಮಾಡಿದರೆ ಗ್ರಾಹಕ ಕೋರ್ಟಲ್ಲಿ ಪ್ರಶ್ನಿಸಬಹುದು
ಕರ್ನಾಟಕದಲ್ಲಿ ಗೃಹನಿರ್ಮಾಣ ಸಹಕಾರ ಸಂಘಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ ಇವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವವರು ಯಾರು? ಸಾಮಾನ್ಯ ಸದಸ್ಯನಿಗೆ ಈ ಸೊಸೈಟಿಯಿಂದ ಮೋಸವಾದರೆ ಆತ ಎಲ್ಲಿಗೆ ಹೋಗಬೇಕು? ನಿವೇಶನವನ್ನು ಫ್ಲ್ಯಾಟನ್ನೋ ನೀಡುತ್ತೇನೆ ಎಂದು ಭರವಸೆ ನೀಡಿ ಕೊನೆಗೆ ಕೈ ಎತ್ತಿದರೆ ಆ ಸದಸ್ಯ ಇಂಥ ಗೃಹನಿರ್ಮಾಣ ಸಹಕಾರ ಸಂಘದ ವಿರುದ್ಧ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಬಹುದು. ಅಂಥದ್ದೊಂದು ಪ್ರಕರಣ ಇಲ್ಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಹಕಾರ ಸಂಘವು ತನ್ನ ಸದಸ್ಯರಿಗಾಗಿ ಬೆಂಗಳೂರಿನಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿತ್ತು. ಈ ಸಂಘದ ಸದಸ್ಯರಾದ ಎಸ್.ಬಿ.ಈಶ್ವರಪ್ಪ ಎಂಬವರಿಗೆ ನಿವೇಶನ ಸಿಕ್ಕಿತ್ತು. ನಿವೇಶನದ ಮೌಲ್ಯ ೯೯,೫೦೦ ರುಪಾಯಿ. ಇದರಲ್ಲಿ ಅವರು ಸಂಘಕ್ಕೆ ೬೪,೦೦೦ ರು. ತುಂಬಿದರು. ಆದರೆ ಸಂಘ ಕೊನೆಗೂ ಇವರಿಗೆ ನಿವೇಶನದ ಕ್ರಯಪತ್ರ ಮಾಡಿ ಕೊಡಲೇ ಇಲ್ಲ. ಇದನ್ನು ಪ್ರಶ್ನಿಸಿ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೂ ಯಾರೊಬ್ಬರೂ ಹಾಜರಾಗಲಿಲ್ಲ. ಅವರ ಗೈರು ಹಾಜರಿಯಲ್ಲೇ ಜಿಲ್ಲಾ ಗ್ರಾಹಕ ವೇದಿಯುೆ ಅರ್ಜಿದಾರರಿಗೆ ಸೊಸೈಟಿಯು ನಿವೇಶನವನ್ನು ನೀಡಬೇಕು. ಅವರಿಂದ ಉಳಿ