ವಾಣಿಜ್ಯ ವ್ಯವಹಾರ ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ
* ಮರು ಮಾರಾಟ ಉದ್ದೇಶದ ನಿವೇಶನ ಖರೀದಿ ವಿವಾದದ ದೂರು ವಜಾ ಗ್ರಾಹಕ ನ್ಯಾಯಾಲಯಗಳಲ್ಲಿ ದೂರನ್ನು ದಾಖಲಿಸುವ ಮೊದಲು ಗ್ರಾಹಕ ರಕ್ಷಣೆ ಕಾಯ್ದೆಯ ಪ್ರಕಾರ ತಾವು ಗ್ರಾಹಕರೇ ಎಂಬುದನ್ನು ಪ್ರತಿಯೊಬ್ಬರೂ ಗಮನಿಸತಕ್ಕದ್ದು. ವಾಣಿಜ್ಯದ ವ್ಯವಹಾರಗಳು ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ನೀವೊಂದು ವಸ್ತುವನ್ನು ಖರೀದಿಸಿ ಅದನ್ನು ಮತ್ತೆ ಮಾರಾಟ ಮಾಡುವವರಿದ್ದರೆ ಈ ಖರೀದಿಯಲ್ಲಿ ನೀವು ಗ್ರಾಹಕರಾಗಿರುವುದಿಲ್ಲ. ಅದು ಲಾಭದ ಉದ್ದೇಶದ ಖರೀದಿಯಾಗಿರುತ್ತದೆ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಅಂಥದ್ದೊಂದು ಪ್ರಕರಣವಿದೆ. ಹೈದ್ರಾಬಾದದ ಸಂಜಯ ಧೀರ್ ಎನ್ನುವವರು ಬಹ್ರೇನ್ ಮೂಲದ, ಆದರೆ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿರುವ ಮೆ.ಎಕ್ಸ್ಪಾಟ್ ಪ್ರಾಜೆಕ್ಟ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ. ಇವರಿಂದ ನಾಲ್ಕು ನಿವೇಶನಗಳನ್ನು (ಪ್ರತಿಯೊಂದೂ 1011.71.ಚ.ಮೀ.) 20,68,000 ರುಪಾಯಿಗಳಿಗೆ ಖರೀದಿಸುವುದಕ್ಕಾಗಿ 9,67,000 ರುಪಾಯಿಗಳನ್ನು ಮುಂಗಡವಾಗಿ ನೀಡಿ ಒಪ್ಪಂದಪತ್ರವನ್ನು ಮಾಡಿಕೊಳ್ಳುತ್ತಾರೆ. ಆದರೆ ಮೆ.ಎಕ್ಸ್ಪಾಟ್ ಪ್ರಾಜೆಕ್ಟ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ. ಇವರು ಸಂಜಯ ಧೀರ್ ಅವರಿಗೆ ನಿವೇಶನಗಳನ್ನು ಹಸ್ತಾಂತರಿಸಲೂ ಇಲ್ಲ, ಅವರ ಹೆಸರಿಗೆ ಕ್ರಯಪತ್ರವನ್ನು ಮಾಡಿಸಿ ಕೊಡಲೂ ಇಲ್ಲ. ಇದರಿಂದ ಅಸಮಾಧಾನಗೊಂಡ ಅವರು ಬೆಂಗಳೂರು 2ನೆ ಹಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿ