ವಿಶ್ವವಿದ್ಯಾಲಯಗಳು ನೀಡುವ ಶಿಕ್ಷಣ ಸೇವೆಯಲ್ಲ
* ಶಿಕ್ಷಣ ಸಂಸ್ಥೆಗಳ ವ್ಯಾಜ್ಯ ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಶಿಕ್ಷಣ ಸಂಸ್ಥೆಗಳಿಂದ ನಡೆಯುವ ಸೇವಾನ್ಯೂನತೆಗೆ ಗ್ರಾಹಕ ನ್ಯಾಯಾಲಯಗಳಲ್ಲಿ ಪರಿಹಾರ ಸಿಗಬಹುದೆ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕು. ಒಂದು ಪ್ರಕರಣದಲ್ಲಿ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ದೂರುದಾರರ ಪರವಾಗಿ ನೀಡಿದ ತೀರ್ಪನ್ನು ರಾಷ್ಟ್ರೀಯ ಆಯೋಗ ರದ್ದುಪಡಿಸಿದೆ. ಇದು ಪಶ್ಚಿಮ ಬಂಗಾಳದ ಹೌರಾದ ಶ್ರೇಯೋಸಿ ಚಟರ್ಜಿ ಮತ್ತು ರೆಜಿಸ್ಟ್ರಾರ್, ಮನೋನ್ಮನಿಯಮ್ ಸುಂದರನಾರ್ ಯುನಿವರ್ಸಿಟಿ, ಅಭಿಷೇಕಪಟ್ಟಿ, ತಿರುನೆಲ್ವೇಲಿ ನಡುವಿನ ಪ್ರಕರಣ. ಶ್ರೇಯೋಸಿ ಟರ್ಜಿಯವರು ಮೇಲೆ ಹೇಳಿದ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್ನಲ್ಲಿ ಎಂಬಿಎ ಮಾಡುತ್ತಿದ್ದರು. ಅವರು 2012ರ ಡಿಸೆಂಬರ್ನಲ್ಲಿ ಕೋರ್ಸ್ ಮುಗಿಸಿದರೂ ಪ್ರಮಾಣಪತ್ರ ನೀಡಿ ಪದವಿಯನ್ನು ದೃಢೀಕರಿಸಿಲ್ಲ ಎಂಬುದು ದೂರು. ಇದರಲ್ಲಿ ಸೇವಾನ್ಯೂನತೆ ತಲೆದೋರಿದೆ ಎಂದು 1.ಮನೋನ್ಮನಿಯಮ್ ಸುಂದರನಾರ್ ಯುನಿವರ್ಸಿಟಿ, 2.ಪಿಎಸ್ಎಸ್ ಪ್ರೊಫೆಶನಲ್ ಕಾಲೇಜು, ಕೋಲ್ಕತಾ ಮತ್ತು 3.ದುರ್ಗಾಪುರ ಸ್ಕೂಲ್ ಆಫ್ ಸೈನ್ಸ್ ಆ್ಯಂಡ್ ಮ್ಯಾನೇಜ್ಮೆಂಟ್, ದುರ್ಗಾಪುರ, ಪ.ಬಂಗಾಳ ಇವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಜಿಲ್ಲಾ ವೇದಿಕೆಯಲ್ಲಿ ದೂರನ್ನು ದಾಖಲಿಸಲಾಯಿತು. ತಮಗೆ ತಕ್ಷಣ ಮಾರ್ಕ್ಸ್ಕಾರ್ಡ್ ಹಾಗೂ ತಾತ್ಕಾಲಿಕ ಪ್ರಮಾಣಪತ್ರ ನೀಡುವಂತೆ ಆದೇಶಿಸಬೇಕು. ಜೊತೆಗೆ ತಮಗೆ ಪರಿಹಾರ ಮತ್ತು ವ್ಯಾಜ್ಯದ ವೆಚ್ಚವನ್ನು ಕೊಡ