ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ
ಅಧಿಕಾರಿಗಳು ಮತ್ತು ಕಾನೂನು ಮಾಡುವವರು ಸ್ವಲ್ಪ ವಿವೇಚನೆ ಬಳಸಿದರೆ ಸಾರ್ವಜನಿಕರ ಬದುಕು ಅದೆಷ್ಟೋ ಸರಳವಾಗಿರುತ್ತಿತ್ತು. ಅನಗತ್ಯವಾಗಿ ಕೋರ್ಟ್ ಕಚೇರಿ ತಿರುಗುವುದು ತಪ್ಪುತ್ತಿತ್ತು. ಅಂಚೆ ಇಲಾಖೆಯ ಅಧಿಕಾರಿಗಳ ಅನಗತ್ಯ ಕಿರಿಕಿರಿಯೊಂದು ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ಹೋಗಿತ್ತು. ಅಲ್ಲಿ ಅದಕ್ಕೆ ಮುಖಭಂಗವಾಯಿತು. ಗುಜರಾತ ರಾಜ್ಯದ ಭಾವನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ರಸೇಂದುಭಾಯಿ ಶಾಂತಿಲಾಲ್ ಪಾರೇಖ್ ಎನ್ನುವವರು ತಮ್ಮ ನಿವೃತ್ತಿಯ ಬಳಿಕ ಹಿರಿಯ ನಾಗರಿಕರ ಸೇವಾ ಯೋಜನೆಯ ಖಾತೆಯೊಂದನ್ನು ತೆರೆದಿದ್ದರು. ಅದನ್ನು ಅಂಚೆ ಇಲಾಖೆಯ ಏಜೆಂಟ್ ಒಬ್ಬನ ಮೂಲಕ ತೆರೆದದ್ದು. ಈ ಖಾತೆಯನ್ನು ಅಂಚೆ ಇಲಾಖೆಯು ಅಂಗೀಕರಿಸಿತ್ತು. ಆದರೆ ಈ ಖಾತೆಗೆ ಆಡಿಟ್ ಆಕ್ಷೇಪಣೆ ಬಂತು. ಆಗ ಅಂಚೆ ಕಚೇರಿಯು ಈ ಖಾತೆಯನ್ನು ಸ್ಥಗಿತಗೊಳಿಸಿತು. ಇದನ್ನು ಖಾತೆದಾರರಿಗೆ ತಿಳಿಸಿತು. ನಿಮಗೆ ಈಗಾಗಲೇ ಕೊಟ್ಟಿರುವ ಬಡ್ಡಿಯನ್ನು ವಜಾ ಮಾಡಿಕೊಂಡು ಖಾತೆಯಲ್ಲಿರುವ ಉಳಿದ ಹಣವನ್ನು ವಾಸಪ್ ನೀಡುವುದಾಗಿ ಹೇಳಿತು. ಆದರೆ ಇದಕ್ಕೆ ಅರ್ಜಿದಾರರು ಒಪ್ಪಲಿಲ್ಲ. ಭಾವನಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದರು. ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿತು. ದೂರುದಾರರು ಖಾತೆ ತೆರೆಯುವುದಕ್ಕೆ ಅರ್ಹರಲ್ಲ ಎಂದಿದ್ದರೆ ಅವರಿಗೆ ಖಾತೆ ತೆರೆಯುವುದಕ್ಕೆ ಅವಕಾಶ ನೀಡಬಾರದಿತ್ತು. ಅದು ಅಂಚೆ ಕಚೇರಿಯ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಅದು ಹೇಳಿತು. ಇದರ ವಿರುದ್ಧ ಅಂಚೆ ಕಚ