ಕೈಬೆರಳಿಗೆ ಗ್ಯಾಂಗ್ರಿನ್ ಬರಲು ಕಾರಣನಾದ ವೈದ್ಯನಿಗೆ ೧ ಲಕ್ಷ ರು. ದಂಡ
ಉತ್ತರ ಪ್ರದೇಶದ ಶಹರಾನ್ಪುರ ಜಿಲ್ಲೆಯ ನಾಗಲ್ ಗ್ರಾಮದ ವಿಜೇಂದ್ರ ಕುಮಾರ್ ಸಾಹಲ್ ಎನ್ನುವವರಿಗೆ ವೃಷಣದಲ್ಲಿ ನೋವು ಕಾಣಿಸಿಕೊಂಡು ಕಿಶೋರ್ಭಾಗ್ದಲ್ಲಿಯ ಕೆ.ಕೆ. ಆಸ್ಪತ್ರೆಗೆ ತೋರಿಸಿಕೊಳ್ಳಲು ತೆರಳಿದರು. ಅವರು ಡಾ.ಕೆ.ಎಸ್. ವರ್ಮಾ ಅವರನ್ನು ೧೨-೧-೨೦೦೨ರಂದು ಭೆಟ್ಟಿಯಾದರು. ೫೦ ರು. ನೀಡಿ ರಸೀದಿಯನ್ನೂ ಪಡೆದರು. ವೃಷಣದಲ್ಲಿ ನೀರು ತುಂಬಿಕೊಂಡಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಡಾ.ವರ್ಮಾ ಹೇಳಿದರು. ಇದಕ್ಕಾಗಿ ಅವರು ೧೬-೧-೨೦೦೨ರಂದು ಆಸ್ಪತ್ರೆಗೆ ದಾಖಲಾದರು. ಅದೇ ದಿನ ಶಸ್ತ್ರಚಿಕಿತ್ಸೆ ನಡೆಯಿತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ನೋವುನಿವಾರಕ ಚುಚ್ಚುಮದ್ದು ಮತ್ತು ಗ್ಲುಕೋಸ್ಅನ್ನು ಸೂಜಿ ಮೂಲಕ ಎಡಗೈಗೆ ನೀಡದರು. ಅವರ ಕೈ ಊದಿಕೊಂಡಿತು. ಕೈಬೆರಳುಗಳು ನೀಲಿ ಬಣ್ಣಕ್ಕೆ ತಿರುಗಿದವು. ಶಸ್ತ್ರಚಿಕಿತ್ಸೆಯ ಬಳಿಕವೂ ವಿಜೇಂದ್ರಕುಮಾರ್ಗೆ ನೋವು ನಿಲ್ಲಲಿಲ್ಲ. ಇದಕ್ಕಾಗಿ ಅವರಿಗೆ ನೋವುನಿವಾರಕಗಳನ್ನು ನೀಡಲಾಯಿತು. ೨೦-೧-೨೦೦೨ರ ವರೆಗೂ ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಯಿತು. ೨೩-೧-೨೦೦೨ರಂದು ವಿಜೇಂದ್ರಕುಮಾರ್ ಡಾ.ಪ್ರವೀಣ್ ಜೈನ್ ಎಂಬ ಸರ್ಜನ್ರನ್ನು ಭೆಟ್ಟಿಮಾಡಿದರು. ಪರಿಶೀಲನೆ ಬಳಿಕ ರೋಗಿಯ ಕೈ ಬೆರಳುಗಳಿಗೆ ಗ್ಯಾಂಗ್ರಿನ್ ಆಗಿದ್ದು, ಪ್ರಾರಂಭಿಕ ಹಂತದಲ್ಲಿದೆ ಎಂದು ಗೊತ್ತಾಯಿತು. ೨೯-೧-೨೦೦೨ರ ವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ತೆರಳಲು ಅವರಿಗೆ ಸೂಚಿಸಲ